Close

ಧಾರ್ಮಿಕ ಸ್ಥಳಗಳು

  • ಬುಲ್ ಟೆಂಪಲ್ (ನಂದಿ ದೇವಸ್ಥಾನ), ಬಸವನಗುಡಿ: ಬಿಗ್ ಬುಲ್ ಟೆಂಪಲ್ ಅಥವಾ ದೊಡ್ಡ ಬಸವನ ಗುಡಿ ಎಂಬುದು ನಂದಿಗೆ ಸಮರ್ಪಿತವಾದ ದೇವಾಲಯವಾಗಿದ್ದು, ಇದರಿಂದ ಬೆಂಗಳೂರಿನ ಬಸವನಗುಡಿ ಪ್ರದೇಶಕ್ಕೆ ತನ್ನ ಹೆಸರು ಬಂದಿದೆ. ಬಸವನಗುಡಿಯಲ್ಲಿ ನಂದಿ ದೇವಾಲಯವನ್ನು 16 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಕೆಂಪೇಗೌಡರು ಕಟ್ಟಿಸಿದರು. ನಂದಿ (ಬುಲ್) ವಿಗ್ರಹವನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದ್ದು 15 ಅಡಿ ಎತ್ತರ ಮತ್ತು 20 ಅಡಿ ಉದ್ದವಿದೆ. ಇದು ವಿಶ್ವದ ಅತಿದೊಡ್ಡ ನಂದಿ ವಿಗ್ರಹಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ.
  • ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಸ್ಥಾನ, ರಾಜಾಜಿನಗರ: ಇಸ್ಕಾನ್ (ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್) 1966 ರಲ್ಲಿ ಸ್ಥಾಪನೆಯಾದ ಒಂದು ಧಾರ್ಮಿಕ ಸಂಘಟನೆಯಾಗಿದೆ. ಇಸ್ಕಾನ್ ವಿಶ್ವದಾದ್ಯಂತ ಹಲವಾರು ದೇವಾಲಯಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ನಡೆಸುತ್ತಿದೆ. ರಾಜಾಜಿನಗರದಲ್ಲಿರುವ ಇಸ್ಕಾನ್ ಬೆಂಗಳೂರು ಕರ್ನಾಟಕದ ಪ್ರಮುಖ ಇಸ್ಕಾನ್ ದೇವಾಲಯವಾಗಿದೆ.
  • ಸೇಕ್ರೆಡ್ ಹಾರ್ಟ್ ಚರ್ಚ್, ಬೆಂಗಳೂರು: ಸೇಕ್ರೆಡ್ ಹಾರ್ಟ್ 1874 ರಲ್ಲಿ ನಿರ್ಮಿಸಲಾದ ಬೆಂಗಳೂರು ನಗರದ ಜನಪ್ರಿಯ ಕ್ಯಾಥೋಲಿಕ್ ಚರ್ಚ್ ಆಗಿದೆ. ಸೇಕ್ರೆಡ್ ಹಾರ್ಟ್ ಚರ್ಚ್ ಸುಸಜ್ಜಿತ, ಶಾಂತಿಯುತ ಮತ್ತು ಉತ್ತಮವಾಗಿ ನಿರ್ವಹಿಸಲ್ಪಟ್ಟ ಚರ್ಚ್ ಕ್ಯಾಂಪಸ್ ಆಗಿದೆ, ಇದು ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸುತ್ತದೆ.
  • ಸೇಂಟ್ ಪ್ಯಾಟ್ರಿಕ್ ಚರ್ಚ್, ಬೆಂಗಳೂರು: ಸೇಂಟ್ ಪ್ಯಾಟ್ರಿಕ್ ಚರ್ಚ್ 1841ರಲ್ಲಿ ಸ್ಥಾಪಿತವಾದ ಬ್ರಿಗೇಡ್ ರಸ್ತೆಯಲ್ಲಿರುವ ಬೆಂಗಳೂರು ನಗರದ ಜನಪ್ರಿಯ ಚರ್ಚ್ ಆಗಿದೆ. ಸೇಂಟ್ ಪ್ಯಾಟ್ರಿಕ್ ಚರ್ಚ್ ಅನ್ನು ಮೂಲತಃ ವರ್ಜಿನ್ ಮೇರಿ ಮತ್ತು ಆರ್ಚಾಂಗೆಲ್ ಮೈಕೆಲ್ ಅವರಿಗೆ ಸಮರ್ಪಿಸಲಾಗಿತ್ತು. ಇದನ್ನು “ಚರ್ಚ್ ಆಫ್ ದಿ ಅಸಂಪ್ಷನ್” ಎಂದು ಗುರುತಿಸಲಾಗಿದೆ. ಆದರೆ ಐರಿಶ್ ಸೈನಿಕರ ತುಕಡಿಗಳು ಚರ್ಚ್ ಬಳಿ ಉಳಿದುಕೊಂಡಿದ್ದರಿಂದ ಇದು ಸೇಂಟ್ ಪ್ಯಾಟ್ರಿಕ್ ಚರ್ಚ್ ಎಂದು ಕಾಲಕ್ರಮೇಣ ಜನಪ್ರಿಯವಾಯಿತು. ಸೇಂಟ್ ಪ್ಯಾಟ್ರಿಕ್ ಚರ್ಚ್ ಅನ್ನು 2000 ಮತ್ತು 2012 ರಲ್ಲಿ ನವೀಕರಿಸಲಾಯಿತು.
  • ಹೋಲಿ ಟ್ರಿನಿಟಿ ಚರ್ಚ್: ಹೋಲಿ ಟ್ರಿನಿಟಿ ಚರ್ಚ್ ಅನ್ನು 1852 ರಲ್ಲಿ ಬ್ರಿಟಿಷ್ ಸರ್ಕಾರವು ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಬ್ರಿಟಿಷ್ ಸೈನಿಕರ ಅನುಕೂಲಕ್ಕಾಗಿ ನಿರ್ಮಿಸಿತು. ಹೋಲಿ ಟ್ರಿನಿಟಿ ಚರ್ಚ್ ಇಂಗ್ಲಿಷ್ ನವೋದಯ (ರಿನೈಸ್ಸಾನ್ಸ್ ) ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ ಮತ್ತು ಏಕ ಕಾಲದಲ್ಲಿ 700 ಕ್ಕೂ ಹೆಚ್ಚು ಜನರಿಗೆ ಪ್ರಾರ್ಥನಾ ಅವಕಾಶ ಕಲ್ಪಿಸುತ್ತದೆ.
  • ಸಂತ ಮೇರಿ ಬೆಸಿಲಿಕಾ: ಸಂತ ಮೇರಿ ಬೆಸಿಲಿಕಾ ಬೆಂಗಳೂರಿನ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದಾಗಿದೆ, ಇದನ್ನು ಸೆಂಜಿ ಗ್ರಾಮದಿಂದ (ತಮಿಳುನಾಡಿನಲ್ಲಿದೆ) ಬಂದ ತಮಿಳು ಕ್ರಿಶ್ಚಿಯನ್ ವಲಸಿಗರು ನಿರ್ಮಿಸಿದ್ದಾರೆ. ಸಂತ ಮೇರಿ ಬೆಸಿಲಿಕಾ ವನ್ನು 17 ನೇ ಶತಮಾನದಲ್ಲಿ ಗೋಥಿಕ್ ಶೈಲಿಯ ವಾಸ್ತುಶಿಲ್ಪ, ಅಲಂಕಾರಿಕ ವಸ್ತುಗಳು, ಬಣ್ಣದ ಗಾಜಿನ ಕಿಟಕಿಗಳು ಮತ್ತು ಭವ್ಯವಾದ ಕಮಾನುಗಳನ್ನು ಬಳಸಿ ನಿರ್ಮಿಸಲಾಯಿತು. ಸೇಂಟ್ ಮೇರಿಸ್ ಬೆಸಿಲಿಕಾ ಮುಖ್ಯ ಗೋಪುರವು ಸುಮಾರು 160 ಅಡಿ ಎತ್ತರವಿದೆ. ನಮ್ಮ ತಾಯಿ ಮೇರಿಯ ಪ್ರತಿಮೆಯನ್ನು ಸೀರೆಯಲ್ಲಿ ಹೊದಿಸಿ ಪ್ರತಿದಿನ ಪೂಜಿಸಲಾಗುತ್ತದೆ. ಬಾಲ ಯೇಸುವನ್ನು ಹಿಡಿದಿರುವ ತಾಯಿ ಮೇರಿಯ ಪ್ರತಿಮೆ ಮೋಡಿ ಮಾಡುವ ಅಪ್ಯಾಯಮಾನ ದೃಶ್ಯವಾಗಿದೆ. ಸಂತ ಮೇರಿ ಬೆಸಿಲಿಕಾವನ್ನು ‘ಮೈನರ್ ಬೆಸಿಲಿಕಾ’ ದರ್ಜೆಗೆ ಮೇಲೇರಿಸಲಾಗಿದೆ. ಈ ಸ್ಥಾನಮಾನವನ್ನು ಸಾಧಿಸಿದ ಕೆಲವೇ ಚರ್ಚುಗಳಲ್ಲಿ ಒಂದಾಗಿದೆ. ವಾರ್ಷಿಕ ಹಬ್ಬ: ಸಂತ ಮೇರಿ ಬೆಸಿಲಿಕಾದಲ್ಲಿ ಸೇಂಟ್ ಮೇರಿಯ ಜನ್ಮದಿನವಾದ ಸೆಪ್ಟೆಂಬರ್ 8 ರಂದು ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ.
  • ಗುರು ಸಿಂಗ್ ಸಭಾ ಗುರುದ್ವಾರ: ಶ್ರೀ ಗುರು ಸಿಂಗ್ ಸಭಾ ಗುರುದ್ವಾರ ಬೆಂಗಳೂರು ನಗರದ ಅತಿದೊಡ್ಡ ಸಿಖ್ ಧರ್ಮಪೀಠವಾಗಿದೆ. ಶ್ರೀ ಗುರು ಸಿಂಗ್ ಸಭಾ ಗುರುದ್ವಾರವು ಅಲಸೂರು ಸರೋವರದ ದಡದಲ್ಲಿದೆ. ಶ್ರೀ ಗುರು ಸಿಂಗ್ ಸಭಾ ಗುರುದ್ವಾರವನ್ನು 1943 ರಲ್ಲಿ ನಿರ್ಮಿಸಲಾಯಿತು ಮತ್ತು ಮೊದಲ ಮಹಡಿಯನ್ನು ಸೇರಿಸಿ 1975 ರಲ್ಲಿ ನವೀಕರಿಸಲಾಯಿತು.
  • ಜಾಮಿಯಾ ಮಸೀದಿ, ಕೆಆರ್ ಮಾರುಕಟ್ಟೆ: ಜಾಮಿಯಾ ಮಸೀದಿ ಬೆಂಗಳೂರಿನ ಅತ್ಯಂತ ಹಳೆಯ ಮಸೀದಿಯಾಗಿದ್ದು, ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಕೆ ಆರ್ ಮಾರ್ಕೆಟ್‌ನಲ್ಲಿದೆ. 18 ನೇ ಶತಮಾನದ ಜಾಮಿಯಾ ಮಸೀದಿ ಎರಡು ಭವ್ಯವಾದ ಮಿನಾರ್ ಮತ್ತು ಆಕರ್ಷಕ ವಾಸ್ತುಶಿಲ್ಪವನ್ನು ಹೊಂದಿದೆ.
  • ಸೋಮೇಶ್ವರ ದೇವಸ್ಥಾನ: ವಿಜಯನಗರ ದೇವಾಲಯದ ಕಾಲದಲ್ಲಿ ನಿರ್ಮಿಸಲಾದ ಬೆಂಗಳೂರಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಅಲಸೂರಿನ ಶ್ರೀ ಸೋಮೇಶ್ವರ ದೇವಸ್ಥಾನ. ಎತ್ತರದ ಗೋಪುರ, 48 ಸ್ತಂಭಗಳು ಮತ್ತು ಸಾಕಷ್ಟು ಶಿಲ್ಪಕಲೆಗಳಿಂದ ಹೆಸರುವಾಸಿಯಾಗಿದೆ.
  • ಬಿಲಾಲ್ ಮಸೀದಿ, ಬೆಂಗಳೂರು: ದಕ್ಷಿಣ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರಮುಖ ಮಸೀದಿಗಳಲ್ಲಿ ಬಿಲಾಲ್ ಮಸೀದಿ ಕೂಡ ಒಂದು. ಬಿಲಾಲ್ ಮಸೀದಿಯನ್ನು ‘ಮಸೀದಿ ಇ ಈದ್ಗಾ ಬಿಲಾಲ್’ ಎಂದೂ ಕರೆಯುತ್ತಾರೆ. ಹಸಿರು ಗುಮ್ಮಟ ಮತ್ತು ನಾಲ್ಕು ಗೋಪುರಗಳನ್ನು ಹೊಂದಿರುವ ನಾಲ್ಕು ಅಂತಸ್ತಿನ ಮಸೀದಿಯು ಅದರ ಧಾರ್ಮಿಕ ಪ್ರಾಮುಖ್ಯತೆಯ ಜೊತೆಗೆ ನೋಡಲು ಕೂಡ ಸುಂದರವಾಗಿ ಕಾಣುವ ತಾಣವಾಗಿದೆ.
  • ಆರ್ಟ್ ಆಫ್ ಲಿವಿಂಗ್: ಆರ್ಟ್ ಆಫ್ ಲಿವಿಂಗ್ ಧ್ಯಾನ ಅಭ್ಯಾಸಗಳು, ಯೋಗ, ಆಯುರ್ವೇದ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಿಗೆ ಜನಪ್ರಿಯವಾದ ಖಾಸಗಿ ಸಂಸ್ಥೆಯಾಗಿದೆ. ಆರ್ಟ್ ಆಫ್ ಲಿವಿಂಗ್ ಅನ್ನು ಶ್ರೀ ಶ್ರೀ ರವಿಶಂಕರ್ ಸಂಸ್ಥಾಪಿಸಿದರು ಮತ್ತು ಅದರ ಜಾಗತಿಕ ಪ್ರಧಾನ ಕಛೇರಿ ಬೆಂಗಳೂರಿನ ಹೊರವಲಯದ ಕನಕಪುರದಲ್ಲಿ ಇದೆ.
  • ರಾಮಕೃಷ್ಣ ಆಶ್ರಮ: ರಾಮಕೃಷ್ಣ ಆಶ್ರಮವು ಶ್ರೀ ರಾಮಕೃಷ್ಣ ಪರಮಹಂಸರು ಸ್ಥಾಪಿಸಿದ ಹಿಂದೂ ಮಠವಾಗಿದ್ದು ರಾಮಕೃಷ್ಣ ಮಿಷನ್‌ನ ಭಾಗವಾಗಿದೆ. ಶ್ರೀ ರಾಮಕೃಷ್ಣ ಪರಮಹಂಸರು ಅವರು 19 ನೇ ಶತಮಾನದ ಸಂತರಾಗಿದ್ದರು ಮತ್ತು ವಿವಿಧ ಸಾಮಾಜಿಕ ಸುಧಾರಣೆಗಳನ್ನುಜಾರಿಗೆ ತಂದ ಕೀರ್ತಿಗೆ ಪಾತ್ರರಾಗಿದ್ದಾರೆ. ರಾಮಕೃಷ್ಣ ಆಶ್ರಮ ಸಂಘಟನೆಯು ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಪ್ರಪಂಚದಾದ್ಯಂತ ನಡೆಸುತ್ತಿದೆ. ಬಸವನಗುಡಿಯಲ್ಲಿರುವ ರಾಮಕೃಷ್ಣ ಆಶ್ರಮ ಬೆಂಗಳೂರು ನಗರದ ಪ್ರಮುಖ ಆದ್ಯಾತ್ಮಿಕ ಕೇಂದ್ರವಾಗಿದೆ.
  • ಪಿರಮಿಡ್ ವ್ಯಾಲಿ: ಪಿರಮಿಡ್ ಕಣಿವೆ ಬೆಂಗಳೂರು ನಗರದ ದಕ್ಷಿಣದಲ್ಲಿರುವ ಒಂದು ಆಧ್ಯಾತ್ಮಿಕ ಕೇಂದ್ರವಾಗಿದೆ, ಇದು ದೈತ್ಯ ಪಿರಮಿಡ್ ಆಕಾರದ ಧ್ಯಾನ ಕೇಂದ್ರಕ್ಕೆ ಜನಪ್ರಿಯವಾಗಿದೆ.
  • ಯಲಹಂಕ: ನರಸಿಂಹ, ವೇಣುಗೋಪಾಲಸ್ವಾಮಿ, ವಿಶ್ವನಾಥೇಶ್ವರ, ವೀರನ್ನಸ್ವಾಮಿ, ನಾಗೇಶ್ವರ, ಪಾಂಡುರಂಗಸ್ವಾಮಿ ದೇವಾಲಯಗಳು ಮತ್ತು ಮೂರು ಅಂಜನೇಯ ದೇವಾಲಯಗಳಿಗೆ ಹೆಸರುವಾಸಿಯಾಗಿದೆ
  • ವೈಟ್ ಫೀಲ್ಡ್: ತಂತ್ರಜ್ಞಾನ ಪಾರ್ಕುಗಳು ಮತ್ತು ಸತ್ಯ ಸಾಯಿ ಪ್ರಶಾಂತಿ ನಿಲಯಕ್ಕೆ ಹೆಸರುವಾಸಿಯಾಗಿದೆ.
  • ವಸಂತಪುರ: ವಸಂತ ವಲ್ಲಭರಾಯಸ್ವಾಮಿ ದೇವಸ್ಥಾನಕ್ಕೆ ನೆಲೆಯಾಗಿದೆ.
  • ಸೊಂಡೆಕೊಪ್ಪ: ಚನ್ನಕೇಶವ ದೇವಸ್ಥಾನ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.
  • ಸೋಮನಹಳ್ಳಿ: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಗೆ ಹೆಸರುವಾಸಿಯಾಗಿದೆ.
  • ಸಿಂಗಾಪುರ: ವರದರಾಜ ದೇವಸ್ಥಾನಕ್ಕೆ ನೆಲೆಯಾಗಿದೆ
  • ಸರ್ಜಾಪುರ: ಕೊಡಂದರಾಮ ದೇವಸ್ಥಾನಕ್ಕೆ ನೆಲೆಯಾಗಿದೆ
  • ಕೆ.ಆರ್.ಪುರಂ: ಕೃಷ್ಣರಾಜ ಪುರಂ ಅದರ ತೂಗು ಸೇತುವೆ, ಮಹಾಬಲೇಶ್ವರ ದೇವಸ್ಥಾನ ಮತ್ತು ಶ್ರೀ ರಾಮ ದೇವಸ್ಥಾನಕ್ಕೆ ಜನಪ್ರಿಯವಾಗಿದೆ.
  • ಕೆಂಚನಹಳ್ಳಿ: ದ್ರಾವಿಡ ಶೈಲಿಯ ರಾಜರಾಜೇಶ್ವರಿ ದೇವಸ್ಥಾನಕ್ಕೆ ಜನಪ್ರಿಯವಾಗಿದೆ. ಹತ್ತಿರದ ಓಂಕಾರ್ ಬೆಟ್ಟಗಳ ಮೇಲಿರುವ ದೊಡ್ಡ ಆಲದ ಮರ ಜನಪ್ರಿಯ ಆಕರ್ಷಣೆಯಾಗಿದೆ.
  • ಕಡುಗೋಡಿ: ಹೊಯ್ಸಳ ಶೈಲಿಯ ಕಾಶಿ ವಿಶ್ವೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಚಿಕ್ಕಜಾಲ: ಹೊಯ್ಸಳ ಯುಗದ ಚೆನ್ನಕೇಶವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಬೇಗೂರು: ನಾಗೇಶ್ವರ ದೇವಸ್ಥಾನ ಮತ್ತು ಚೋಳೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಹುಳಿಮಾವು: ನೈಸರ್ಗಿಕ ಬಂಡೆಗಳು ಮತ್ತು ಗುಹೆ ಕೆಳಗಿರುವ ದೇವಾಲಯಕ್ಕೆ ಹೆಸರುವಾಸಿಯಾಗಿದೆ
  • ಅಗರ: ವೆಂಕಟರಮಣ, ರಾಮ, ಸೋಮೇಶ್ವರ, ಗಣೇಶ ಮತ್ತು ಕರಗದಮ್ಮ ದೇವಾಲಯಗಳಿಗೆ ನೆಲೆಯಾಗಿದೆ.
  • ಐಗಂಡಪುರ: ಧರ್ಮೇಶ್ವರ ದೇವಸ್ಥಾನ ಮತ್ತು ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
  • ಅನೆಕಲ್: ತಿಮ್ಮರಾಯಸ್ವಾಮಿ, ಆದಿನಾರಾಯಣ, ಅಮೃತ ಮಲ್ಲಿಕಾರ್ಜುನ, ಚನ್ನಕೇಶವ ಮತ್ತು ಭವಾನಿಶಂಕರ ದೇವಾಲಯಗಳಿಗೆ ಹೆಸರುವಾಸಿಯಾಗಿದೆ.
  • ಸೇಂಟ್ ಲ್ಯೂಕ್ಸ್ ಇಗರ್ಜಿ, ಚಾಮರಾಜಪೇಟೆ: ಕೆಆರ್ ಮಾರುಕಟ್ಟೆ ಪ್ರದೇಶದ ಹಳೆಯ ಚರ್ಚ್
  • ಕೋಟೆ ವೆಂಕಟರಮಣ ದೇವಸ್ಥಾನ: ಕೆ.ಆರ್ ಮಾರುಕಟ್ಟೆಯಲ್ಲಿ ಕೆ.ಆರ್ ರಸ್ತೆಯಲ್ಲಿದೆ, ಕೋಟೆ ವೆಂಕಟರಮಣ ದೇವಾಲಯವು 17 ನೇ ಶತಮಾನದ ದ್ರಾವಿಡ ಮತ್ತು ವಿಜಯನಗರ ಶೈಲಿಯ ದೇವಾಲಯವಾಗಿದ್ದು, ವೆಂಕಟೇಶ್ವರನನ್ನ ಪೂಜಿಸಲಾಗುತ್ತದೆ.
  • ಮಸೀದಿ-ಎ-ಖಾದ್ರಿಯಾ: ಮಿಲ್ಲರ್ಸ್ ರಸ್ತೆಯಲ್ಲಿರುವ ಒಂದು ಸುಂದರವಾದ ಮಸೀದಿ
  • ಶಿಶು ಜೀಸಸ್ ಚರ್ಚ್: ವಿವೇಕ ನಗರದಲ್ಲಿ ಇತ್ತೀಚೆಗೆ ನಿರ್ಮಿಸಲಾದ ರೋಮನ್ ಕ್ಯಾಥೊಲಿಕ್ ಚರ್ಚ್.
  • ರಂಗನಾಥಸ್ವಾಮಿ ದೇವಸ್ಥಾನ: ರಾಜಜಿನಗರದಲ್ಲಿ 16 ನೇ ಶತಮಾನದ ವಿಜಯನಗರ ಶೈಲಿಯ ದೇವಾಲಯ.
  • ರಾಗಿಗುಡ್ಡ ದೇವಸ್ಥಾನ: ಜಯನಗರ 9 ನೇ ಬ್ಲಾಕ್‌ನಲ್ಲಿರುವ ರಾಗಿಗುಡ್ಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನವು ಸಣ್ಣ ಗುಡ್ಡದ ಮೇಲಿದ್ದು, ಸುತ್ತ ಮುತ್ತಲಿನಲ್ಲಿ ಬಹಳ ಜನಪ್ರಿಯವಾಗಿದೆ