ಬೆಂಗಳೂರು ನೆರೆಹೊರೆ
ಬೆಂಗಳೂರು ನೆರೆಹೊರೆ: ಚಿಕ್ಕಬಳ್ಳಾಪುರ
- ನಂದಿ ಬೆಟ್ಟ: ನಂದಿ ಬೆಟ್ಟ ಬೆಂಗಳೂರಿನಿಂದ ಅತ್ಯಂತ ಜನಪ್ರಿಯವಾದ ಸ್ಥಳವಾಗಿದೆ. ತಂಪಾದ ಗಾಳಿ, ರಮಣೀಯ ದೃಶ್ಯ, ಟಿಪ್ಪು ಡ್ರಾಪ್, ಉದ್ಯಾನ, ದೇವಸ್ಥಾನ ಮತ್ತಿತರ ಕಾರಣಗಳಿಂದಾಗಿ ನಗರವಾಸಿಗಳನ್ನು ಕೈಬೀಸಿ ಕರೆಯುತ್ತದೆ.
- ಕೈವಾರ: ಹಿಂದೆ ಏಚಕ್ರಪುರ ಎಂದು ಕರೆಯಲಾಗುತ್ತಿದ್ದ ಕೈವಾರ ಪಾಂಡವರು ಕೌರವರೊಂದಿಗೆ ಪಗಡೆ ಆಟದಲ್ಲಿ ಸೋತ ನಂತರ ಅಜ್ಞಾತವಾಸ ನಡೆಸುತ್ತಿದ್ದ ಸ್ಥಳ ಎಂದು ನಂಬಲಾಗಿದೆ. ಪಾಂಡವ ಸಹೋದರರಲ್ಲಿ ಒಬ್ಬನಾದ ಭೀಮ, ಗ್ರಾಮಸ್ಥರನ್ನು ಸತತವಾಗಿ ಹಿಂಸಿಸುತ್ತಿದ್ದ ಬಕಾಸುರ ಎಂಬ ರಾಕ್ಷಸನನ್ನು ಇಲ್ಲಿ ಕೊಂದಿದ್ದಾನೆ ಎನ್ನಲಾಗಿದೆ. ಅಮರನಾರಾಯಣ ಮತ್ತು ಭೀಮೇಶ್ವರ ದೇವಾಲಯಗಳು ಮತ್ತು ಯೋಗಿ ನಾರಾಯಣ ಆಶ್ರಮವು ಕೈವಾರದಲ್ಲಿ ಭೇಟಿ ನೀಡಲು ಯೋಗ್ಯವಾಗಿದೆ. ಸಣ್ಣ ಮೃಗಾಲಯ, ಗಿಡಮೂಲಿಕೆ ಉದ್ಯಾನ, ಪಾಂಡವರ ಹೆಸರಿನ ಕುಟೀರಗಳು, ಉದ್ಯಾನ ಮತ್ತು ಸಂಗೀತ ಕಾರಂಜಿಗಳು ಕೈವಾರದಲ್ಲಿ ಪ್ರಮುಖ ಆಕರ್ಷಣೆಗಳಾಗಿವೆ.
ಬೆಂಗಳೂರು ನೆರೆಹೊರೆ: ರಾಮನಗರ ಜಿಲ್ಲೆ
- ರಾಮನಗರ ಬಂಡೆ ಹತ್ತುವ ಸಾಹಸ: ರಾಮನಗರ ಜಿಲ್ಲೆಯು ದೈತ್ಯ ಬಂಡೆಗಳಿಗೆ ಹೆಸರುವಾಸಿಯಾಗಿದೆ. ರಾಮನಗರದಲ್ಲಿರುವ ರಾಮದೇವರ ಬೆಟ್ಟ ಸಾಹಸ ಪ್ರಿಯರನ್ನು ಮತ್ತು ಬಂಡೆ ಏರುವ ಆಸಕ್ತರನ್ನು ಆಕರ್ಷಿಸುತ್ತದೆ. ಬಂಡೆ ಏರುವುದು (ರಾಕ್ ಕ್ಲೈಂಬಿಂಗ್) ಮತ್ತು ಬಂಡೆಯ ಮೇಲಿಂದ ಹಂತ ಹಂತವಾಗಿ ಧುಮುಕುವುದು (ರಾಪೆಲಿಂಗ್) ಸಾಕಷ್ಟು ದೈಹಿಕ ಕ್ಷಮತೆ ಬೇಡುವ ಸಾಹಸ ಚಟುವಟಿಕೆಗಳಾಗಿದ್ದು ಯುವಜನತೆಯನ್ನು ಕೈ ಬೀಸಿ ಕರೆಯುತ್ತದೆ. ಹಲವಾರು ಖಾಸಗಿ ಕಂಪನಿಗಳು ರಾಮನಗರಕ್ಕೆ ಮಾರ್ಗದರ್ಶಿ ಪ್ರವಾಸಗಳು ಮತ್ತುಬಂಡೆ ಏರುವ ಸಾಹಸ ಯೋಜಿಸುತ್ತವೆ. Https://www.wandertrails.com/activities/ramanagara-trek ಪರಿಶೀಲಿಸಿ. ತಜ್ಞರ ಸಹಾಯ ಮತ್ತು ಮೇಲ್ವಿಚಾರಣೆಯಿಲ್ಲದೆ ಏಕಾಂಗಿಯಾಗಿ ಅಥವಾ ಸಣ್ಣ ಗುಂಪುಗಳಲ್ಲಿ ಬಂಡೆ ಏರುವುದು ಅಪಾಯಕಾರಿಯಾಗಿದೆ.
- ವಂಡರ್ ಲಾ ಥೀಮ್ ಪಾರ್ಕ್: ರಾಮನಗರ ಜಿಲ್ಲೆಯ ಬೆಂಗಳೂರಿನ ಹೊರವಲಯದಲ್ಲಿರುವ ವಂಡರ್ ಲಾ ಜನಪ್ರಿಯ ಥೀಮ್ ಪಾರ್ಕ್ ಮತ್ತು ಮನರಂಜನಾ ಚಟುವಟಿಕೆ ಕೇಂದ್ರವಾಗಿದೆ. ಮೋಜಿನ ಸವಾರಿಗಳು, ನೀರಿನ ಆಟಗಳು ಮತ್ತು ಮೈ ನವಿರೇಳಿಸುವ ಸಾಹಸಿ ಸವಾರಿಗಳಿಂದಾಗಿ ವಂಡರ್ ಲಾ ಕುಟುಂಬದೊಂದಿಗೆ ದಿನ ಕಳೆಯಲು ನೆಚ್ಚಿನ ತಾಣವಾಗಿದೆ.
- ಸಾವನದುರ್ಗ: ಸಾವನದುರ್ಗ ಏಷ್ಯಾದ ಅತಿದೊಡ್ಡ ಏಕಶಿಲೆಯ ಬೆಟ್ಟ, ಬೆಂಗಳೂರು ನಗರದಿಂದ ಪಶ್ಚಿಮಕ್ಕೆ 50 ಕಿ.ಮೀ.ದೂರದಲ್ಲಿದೆ. ಸಾವನದುರ್ಗದ ಇತಿಹಾಸವು 14 ನೇ ಶತಮಾನದಷ್ಟು ಹಿಂದಿನದು. 3 ನೇ ಹೊಯ್ಸಳ ರಾಜ ಬಲ್ಲಾಳ ಬೆಟ್ಟಕ್ಕೆ ಸವಂಡಿ ಎಂದು ಹೆಸರಿಟ್ಟನು. ನಂತರ ಸಾವನದುರ್ಗ ಕೆಂಪೇಗೌಡ, ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ಅಧೀನದಲ್ಲಿತ್ತು.
- ಫೀವರ್ ಪಿಚ್: ಮಾಗಡಿ ಬಳಿ ಹೊರಾಂಗಣ ಸಾಹಸ ಕ್ರೀಡಾ ಸ್ಥಳ, ಬೆಂಗಳೂರಿನಿಂದ 38 ಕಿ.ಮೀ. ಎಟಿವಿ ಸವಾರಿಗಳು, ಕಯಾಕಿಂಗ್, ವಾಟರ್ಸ್ಪೋರ್ಟ್ಗಳು, ಕ್ಯಾಂಪಿಂಗ್ ಅನುಭವಗಳು, ತಂಡ ನಿರ್ಮಾಣ ಚಟುವಟಿಕೆಗಳು ಇತ್ಯಾದಿಗಳನ್ನು ನೀಡುತ್ತದೆ https://www.feverpitchholidays.com/
- ಜಾನಪದ ಲೋಕ: ರಾಮನಗರದಿಂದ 10 ಕಿ.ಮೀ ದೂರದಲ್ಲಿ ಇರುವ ಜಾನಪದ ಲೋಕ ಒಂದು ತೆರೆದ ಸ್ಥಳವಾಗಿದ್ದು, ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ರಂಗಮಂದಿರ, ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ ಇಲ್ಲಿವೆ.
ಬೆಂಗಳೂರು ನೆರೆಹೊರೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಮಕಾಳಿದುರ್ಗ: ಮಕಾಳಿದುರ್ಗ ಹಳ್ಳಿಯ ಸಮೀಪದಲ್ಲಿರುವ ಬೆಟ್ಟದ ಕೋಟೆ. ಇದು ಬೆಂಗಳೂರಿನ ಉತ್ತರಕ್ಕೆ 60 ಕಿ.ಮೀ ದೂರದಲ್ಲಿದೆ
- ತಿಪ್ಪಗೊಂಡನಹಳ್ಳಿ ಜಲಾಶಯ: ಅರ್ಕಾವತಿ ಮತ್ತು ಕುಮುದಾವತಿ ವಿಲೀನಗೊಳ್ಳುವ ಜಲಾಶಯ. ಪ್ರಸ್ತುತ ಪ್ರವಾಸಿಗರಿಗಾಗಿ ಜಲಾಶಯವನ್ನು ಮುಚ್ಚಲಾಗಿದೆ.